Saturday, March 21, 2015

ಅರವತ್ತು ಅರವತ್ತು ಅರವತ್ತು... ವಾಹ್

ಒಂದು ಪ್ರಾಥಮಿಕ ಶಾಲೆ

ಮಾಸ್ತರರು ಹೇಳಿದರು.. "ಮಕ್ಕಳೇ ಇಂದು ಹಾಜರಿ ತೆಗೆದುಕೊಳ್ಳಬೇಕು.. ಎಲ್ಲರೂ ಇಂದು ನಿಮ್ಮ ಹೆಸರಿಗೆ ಬದಲಾಗಿ ನಿಮ್ಮ ನಿಮ್ಮ ಕ್ರಮ ಸಂಖ್ಯೆಯನ್ನು ಹೇಳಿ.. ಆದಷ್ಟು ಜೋರಾಗಿ ಹೇಳಬೇಕು ಆಯಿತೆ"

ಮಕ್ಕಳು ಕೂಡ.. ಮಾಸ್ತರರ ದನಿಯನ್ನೇ ಅನುಕರಿಸಿ ಅವರಿಗಿಂತ ತುಸು ಜೋರಾಗಿಯೇ ತಮ್ಮ ತಮ್ಮ ಕ್ರಮ ಸಂಖೆಯಗಳನ್ನು ಹೇಳುತ್ತಾ ಹೋದರು. 

ಹತ್ತಾಯಿತು, ಇಪ್ಪತ್ತಾಯಿತು, ಮೂವತ್ತಾಯಿತು, ನಲವತ್ತು ಸಾಲಿನ ಸಂಖ್ಯೆಗಳು ಧಾಟಿ ಐವತ್ತರ ಸಾಲಿಗೆ ಬಂದವು..

"ಐವತ್ತು, ಐವತ್ತೊಂದು, ಐವತ್ತೆರಡು, ಐವತ್ತಮೂರು, ಐವತ್ತನಾಲ್ಕು, ಐವತ್ತೈದು, ಐವತ್ತಾರು, ಐವತ್ತೇಳು, ಐವತ್ತೆಂಟು, ಐವತ್ತೊಂಭತ್ತು... "

ಮಕ್ಕಳು ಮೇಲ್ಚಾವಣಿ ಕಿತ್ತು ಹೋಗುವಂತೆ ಜೋರಾಗಿ ಹೇಳುತ್ತಿದ್ದರು..

ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು, ಐವತ್ತೊಂಭತ್ತು,

ಗುರುಗಳು "ಐವತ್ತೊಂಭತ್ತು ಅಂಕೆಯನ್ನು ಐವತ್ತೊಂಭತ್ತು ಬಾರಿ ಹೇಳಾಯಿತು.. ಮುಂದಕ್ಕೆ ಹೇಳ್ರೋ.. ."

ಮಕ್ಕಳು ಸುಮ್ಮನೆ ಗುರುಗಳನ್ನು ನೋಡುತ್ತಾ ಕೂತರು.. ತರಗತಿಯಲ್ಲಿ ಐವತ್ತೊಂಭತ್ತು ವಿಧ್ಯಾರ್ಥಿಗಳು ತಮ್ಮ ಹಾಜರಿ ಕೊಟ್ಟಿದ್ದರು.. .. ಯಾಕೋ ಲೆಕ್ಕ ತಪ್ಪಿತೆ ಎಂದು ಅನುಮಾನಗೊಂಡ ಗುರುಗಳು.. ಕಣ್ಣಲ್ಲೇ ಒಟ್ಟು ವಿಧ್ಯಾರ್ಥಿಗಳ  ಲೆಕ್ಕವನ್ನು ಹಾಕತೊಡಗಿದರು.. ಅರೆ ಹೌದು ನನ್ನ ತರಗತಿಯಲ್ಲಿ ಅರವತ್ತು ವಿಧ್ಯಾರ್ಥಿಗಳು ಇರುವುದು..

ಇದೇನು ಅರವತ್ತನೇ ಹುಡುಗ ಎಲ್ಲಿ.. ಕಣ್ಣಲ್ಲೇ ಹುಡುಕಿದರೂ.. ಕಾಣಲಿಲ್ಲ, ಒಂದು ಕ್ಷಣ ಕಣ್ಣು ಮುಚ್ಚಿ ಕೂತರು..

"ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ
ಕಾಶಿಯಾ ಶಾಸ್ತ್ರಗಳನಾಕ್ಸಫರ್ಡಿನವರು |
ದೇಶಕಾಲವಿಭಾಗ ಮನದ ರಾಜ್ಯದೊಳಿರದು

ಶ್ವಾಸವದು ಬೊಮ್ಮನದು – ಮಂಕುತಿಮ್ಮ. ||"

ಜೋರಾಗಿ ಈ ಕಗ್ಗದ ಪದಗಳು ತರಗತಿಯ ಕೊಠಡಿಯ ಬಾಗಿಲಿನ ಬಳಿ ಯಾರೋ ಓದುತ್ತ ಬಂದದ್ದು ಕೇಳಿಸಿತು..

ಗುರುಗಳಿಗೆ ತಕ್ಷಣ ಅರಿವಾಯಿತು.. ಅರೆ ಇದು ನನ್ನದೇ ಮುಕ್ತಕ.. ಅದು ಅರವತ್ತನೆಯದು.. ಸರಿಯಾಗಿದೆ..

ಗುರುಗಳು "ಬಾ ಬಾರೋ ರವಿ.. ಇದು ಅರವತ್ತನೆಯ ಮುಕ್ತಕ.. ಏನಪ್ಪಾ ಇದು ಓದುತ್ತಾ ಬರುತ್ತಿದ್ದೀಯ.. ಏನು ಸಮಾಚಾರ"
ರವಿ ಹೇಳುತ್ತಾರೆ.. " ಏನಿಲ್ಲ ಗುರುಗಳೇ.. ಇಂದು ಈ ಕಗ್ಗ ತುಂಬಾ ನೆನಪಿಗೆ ಬಂತು ಅದಕ್ಕೆ ಓದುತ್ತಾ ಬಂದೆ.. ನನಗೆ ಅರಿವಿಲ್ಲದೆ ಓದುತ್ತಾ ಓದುತ್ತಾ.. ಶಾಲೆಯೊಳಗೆ ಕಾಲಿಟ್ಟೆ.. ಅರವತ್ತು ಗುರುಗಳೇ.. ಇದು ನನ್ನ ಹಾಜರಿ" ಎಂದನು ಆ ಪುಟ್ಟ ಹುಡುಗ..

ಗುರುಗಳು ಸಂತಸಭರಿತ ತಲೆ ಸವರುತ್ತಾ "ರವಿ ಪುಟ್ಟಾ.. ನನಗೆ ಅರಿವಿದೆ.. ನೀನು ಭೂಮಿಗೆ ಬಂದು ಅರವತ್ತು ವಸಂತಗಳು ಆಯಿತು.. ಹಾಗೆಯೇ ಈ ಮುಕ್ತಕ ಕೂಡ ಅರವತ್ತನೆಯದು.. ಎಷ್ಟು ಹೊಂದಾಣಿಕೆ ಇದೆ... ನೀನು ನನ್ನ ಮುಕ್ತಕಗಳನ್ನು ನಿನ್ನ ಧಾಟಿಯಲ್ಲಿ ಬರೆಯುತ್ತಿರುವ ಸಂಖ್ಯೆ ನಿನ್ನೆಗೆ ೭೯೯ ಆಗಿದೆ.. ಇನ್ನು ಕೆಲವೇ ಮಾಸಗಳಲ್ಲಿ ನಿನ್ನ ಶೈಲಿಯಲ್ಲಿ ಸಕಲರಿಗೂ ಅರಿವಾಗುವ ಹಾಗೆ ವಿವರಿಸುತ್ತಿರುವ ನನ್ನ ಎಲ್ಲಾ ಮುಕ್ತಕಗಳಿಗೂ ವಿವರಣೆ ಸಿಕ್ಕಿಯೇ ಬಿಡುತ್ತದೆ. ನನಗೆ ಬಲು ಸಂತಸವಾಗುತ್ತಿದೆ. ಇಷ್ಟವಾದುದ್ದನ್ನು, ಕಷ್ಟವಾದುದ್ದನ್ನು, ಮುಕ್ತವಾಗಿದ್ದನ್ನು ಎಲ್ಲರಿಗೂ ತಿಳಿಸುತ್ತಿರುವ ರೀತಿ ನನಗೆ ಬಲು ಇಷ್ಟಮಯ"

ಪುಟಾಣಿ ರವಿ ಕಣ್ಣಲ್ಲೇ ಆನಂದ ಭಾಷ್ಪ.. ಗುರುಗಳ ಹೊಗಳಿಕೆಯನ್ನು, ಬೆನ್ನು ತಟ್ಟುವಿಕೆಯನ್ನು ಅನುಭವಿಸುತ್ತಿರುವ ಅವರ ಮನಸ್ಸು ಭಲೇ ರವಿ ಭಲೇ ಎಂದು ಹೇಳುತ್ತಿತ್ತು.

ಗುರುಗಳು ಮಾತನ್ನು ಮುಂದುವರೆಸಿದರು.. "ರವಿ.. ನೀನು ಇಷ್ಟು ಸಾಧಿಸಿದ್ದರು ನೀನು ಏನು ಸಾಧಿಸಿಲ್ಲ ಎನ್ನುವ ನಿನ್ನ ತಾತ್ವಿಕ ಗುಣ.. ಹಾಗೂ ಸಾಧಿಸಬೇಕಾದ್ದು ಬೇಕಾದಷ್ಟು ಇದೆ ಎನ್ನುವ ನಿನ್ನ ನಮ್ರ ಗುಣವೆ ನಿನ್ನನ್ನು ಪ್ರಾಥಮಿಕ ಶಾಲೆಯಲ್ಲಿ ನನ್ನ ವಿಧ್ಯಾರ್ಥಿಯನ್ನಾಗಿ ಮಾಡಿದೆ.. ಆದರೆ ಇಂದು ಜಗತ್ತಿಗೆ ಹೇಳುತ್ತಿರುವೆ.. ನಿನ್ನದು ಗಜ ಗಾತ್ರದ ಸಾಧನೆ.. ಆದರೆ ನಿನ್ನ ನಮ್ರ ಮನಸ್ಸಿಗೆ ಕಾಣುವುದು ಗುಲಗಂಜಿಯಷ್ಟೇ ಸಾಧನೆ ಎಂದು.. ಅದಕ್ಕೆ ನಿನ್ನನ್ನು ಎಲ್ಲರೂ ಇಷ್ಟಪಡುವುದು.. ನಿನ್ನ ಸ್ನೇಹ ಮಂಡಲ ಸೌರ ಮಂಡಲದಷ್ಟೇ ಪ್ರಕಾಶಮಾನ.. "

ನಿನ್ನ ಅರವತ್ತು ವರ್ಷಗಳ ವಸಂತಮಾಸವನ್ನು ಒಮ್ಮೆ ಇಣುಕಿ ನೋಡಿದಾಗ ನಿನ್ನ ಸಾಧನೆ ಕಂಡು ನಿನ್ನ ಗುರುವಾದ ನನಗೆ ಹೆಮ್ಮೆ ಎನಿಸುತ್ತದೆ.. ಹೌದು ಇಂದು ನೀನು ನನ್ನ ತರಗತಿಯಲ್ಲಿ ಹಾಜರಿ ಹೇಳದೆ ನನ್ನ ಅರವತ್ತನೇ ಮುಕ್ತಕ ಓದುತ್ತಾ ಬಂದಾಗ ನನಗೆ ಆದ ಸಂತಸ ಹೇಳ ತೀರದು.

ರವಿ ನಿನಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಈ ರೀತಿಯಲ್ಲಿ ಹೇಳುತ್ತಿದ್ದೇನೆ.. ಹಾಗೂ ಆಶಿರ್ವದಿಸುತ್ತಿದ್ದೇನೆ.. ನಿನ್ನ ಅರವತ್ತು ವಸಂತಗಳ ಸಾರ್ಥಕ ಜೀವನ ಇನ್ನಷ್ಟು ಪ್ರಜ್ವಲಿಸಲಿ.. ಹೀಗೆ ಯಶಸ್ಸಿನ ಜೀವನ ಮುನ್ನುಗ್ಗಲಿ, ಶತಕದ ಸಾಧನೆ ನಿನ್ನದಾಗಲಿ.

ಕಂದಾ ನಿನಗೆ ಹುಟ್ಟು ಹಬ್ಬದ   ಶುಭಾಶಯಗಳು.. ನನ್ನ ತರಗತಿಯಲ್ಲಿನ ಎಲ್ಲ ವಿಧ್ಯಾರ್ಥಿಗಳಲ್ಲಿ ನೀನು ನನ್ನ ಪ್ರೀತಿಯ ವಿಧೇಯ ವಿಧ್ಯಾರ್ಥಿಗಳಲ್ಲಿ ನೀನು ಮೊದಲ ಸಂಖೆಯಲ್ಲಿ ನಿಲ್ಲುವವನು..

ರವಿ ಪುಟಾಣಿಯ ಕಣ್ಣಲ್ಲಿ ಜೋಗದ ಜಲಧಾರೆ.. ಸಾಕ್ಷಾತ್ ಕಗ್ಗ ಪಿತಾಮಹರೆ ಬಂದು ನನ್ನ ಅರವತ್ತನೇ ವಸಂತಕ್ಕೆ ಶುಭ ಹಾರೈಸಿದ್ದಾರೆ. ಇದಕ್ಕಿಂತ ನನಗೆ ಇನ್ನೇನು ಬೇಕು.. ಕೈಯಲ್ಲಿ ಹಿಡಿದ್ದಿದ ಕಗ್ಗ ಪುಸ್ತಕ ಹಾಗೆ ಜೋಡಿಯಾಗಿ ಆ ಮಹಾನ್ ಕಗ್ಗ ಗುರುಗಳಿಗೆ ನಮಸ್ಕರಿಸುತ್ತಾ ಧನ್ಯೋಸ್ಮಿ ಎಂದಿತು ಆ ಪುಟಾಣಿಯ ಮನಸ್ಸು.

*****

ರವಿ ಗುರುಗಳೇ.. ನಿಮ್ಮ ಜನುಮದಿನಕ್ಕೆ ಶುಭ ಕೋರಬೇಕು ಎಂದು ಹಂಬಲಿಸಿದಾಗ.. ಇಂದು ಯುಗಾದಿ ಹಬ್ಬ.ಹಬ್ಬದ ಸಂಭ್ರಮದಲ್ಲಿ.. ಮನೆ ಮನದಲ್ಲಿ ಇರುವ ಕುಟುಂಬದ ಸದಸ್ಯರೊಡನೆ ಸೇರಿ ನಲಿಯುತ್ತ ಇದ್ದಾಗ.. ದಿನ ಹೇಗೆ ಕಳೆಯಿತು ಎಂದು ಅರಿವಾಗಲೇ ಇಲ್ಲ.. ರಾತ್ರಿ ಮಲಗುವ ಮುನ್ನ ನಿಮಗೆ ಶುಭ ಹಾರೈಸಲೇ ಬೇಕು ಎಂಬ ಹಠ ತೊಟ್ಟು ಬರೆಯಲು ಕೂತಾಗ ಕೆಲವೇ ಕ್ಷಣಗಳಲ್ಲಿ ಈ ಲೇಖನವನ್ನು ನನ್ನ ಮನದೊಳಗೆ ಕೂತು ಬರೆಸಿದ್ದು ನಿಮ್ಮ ಸ್ನೇಹ ಪರ ಮನಸ್ಸು ಹಾಗೂ ಡಿವಿಜಿ ಅಜ್ಜನ ಆಶೀರ್ವಾದ. ಅಜ್ಜನ ಬಾಯಿಂದಲೇ ನಿಮಗೆ ಶುಭಾಶಯಗಳನ್ನು ಹೇಳಿಸಬೇಕು ಎಂಬ ಪಣ ತೊಟ್ಟ ನನ್ನ ಕೀಲಿಮಣೆ .. ನಿಮ್ಮ ಹೆಸರನ್ನು ಹೇಳುವಾಗ ಏಕ ವಚನದಲ್ಲಿ ಬರೆಸಿಯೇ ಬಿಟ್ಟಿತು.. ಬೇರೆ ದಾರಿಯಿಲ್ಲದೆ ಹಾಗೆ ಮಾಡಬೇಕಾಯಿತು. ಕ್ಷಮೆ ಇರಲಿ..
ಕಗ್ಗಗಳ ಪಿತಾಮಹರ ಆಶಿರ್ವಾದದ ನೆರಳಲ್ಲಿ ರವಿ ತಿರುಮಲೈ ಗುರುಗಳು -
(ಚಿತ್ರ ಕೃಪೆ ರವಿ ಸರ್ ಅವರ ಟೈಮ್ ಲೈನ್ )

ನಿಮ್ಮ ಪ್ರತಿದಿನದ ನುಡಿಮುತ್ತುಗಳು, ಕಗ್ಗ ರಸಧಾರೆ, ಜೊತೆಯಲ್ಲಿ ನೀವು ನನ್ನ ಮಾತಾಡಿಸುವಾಗ "ರಾಜ" ಎನ್ನುವ ಆ ಸ್ನೇಹ ಪರ ಧ್ವನಿ ನನಗೆ ಬಲು ಇಷ್ಟ.

ಮತ್ತೊಮ್ಮೆ ನನ್ನ ಸಕಲ ಸ್ನೇಹಲೋಕದ ಸದಸ್ಯರ ಪರವಾಗಿ ಷಷ್ಠಿ ಸಂಭ್ರಮಕ್ಕೆ ಶುಭಾಶಯಗಳು. 

Sunday, March 8, 2015

ಹೀಗೊಂದು ಪರ್ಸ್" ಸಂಗ"

ಹಸ್ತಿನಾಪುರದಲ್ಲಿ ದ್ಯೂತದ  ಆಟದಲ್ಲಿ ಸೋತ ವೀರ ಕಲಿಗಳು ತಲೆ ಬಗ್ಗಿಸಿಕೊಂಡು ಕೂತಿದ್ದರು, ದುರುಳ ದುಷ್ಟ ಚತುಷ್ಟಯರು ಎಂದೇ ಹೆಸರಾಗಿದ್ದ ದುರ್ಯೋಧನ, ದುಶ್ಯಾಸನ, ಕರ್ಣ, ಶಕುನಿ ಕಿರುಚಾಡುತ್ತ ಕೇಕೆ ಹಾಕುತ್ತ ಪಾಂಡವರ ಮಕುಟದ ಮಣಿ ದ್ರೌಪದಿಯನ್ನು ಸಭೆಗೆ ಕರೆದು ತರಲು ಅಪ್ಪಣೆ ಮಾಡಿದರು.

ಈ ಘಟನೆ ನೆಡೆದು ಸುಮಾರು ಇಪ್ಪತ್ತು ವರ್ಷ ಆಯಿತು. 

ಮಿನರ್ವ ಸರ್ಕಲ್ ಬಳಿಯ ಒಂದು ಪುಟ್ಟ ಸಂಸ್ಥೆಯಲ್ಲಿ ಕೆಲಸ ಸಾಗಿತ್ತು. ನನಗೆ ಅರಿವಿಲ್ಲದೆ ನನ್ನನ್ನು ಅಣ್ಣ ಎಂದೋ, ಅಥವಾ ತಾವು ಅವರ ತಂಗಿ ಎನ್ನುವ ಭಾವ ತೋರುವ ಅನೇಕರು ನನಗೆ ಉದ್ಯೋಗ ಯಾತ್ರೆಯಲ್ಲಿ ಸಿಕ್ಕಿದ್ದಾರೆ. ಅದು ಅವ್ಯಾಹತವಾಗಿ ಮುಂದುವರೆದಿದೆ ಇಂದಿಗೂ. 

ನನ್ನ ಸಹೋದ್ಯೋಗಿಯಾಗಿ ಬಂದು ನನ್ನ ಬಾಳಿನಲ್ಲಿ ತಂಗಿಯಾದ ಜ್ಯೋತಿ ಎನ್ನುವ ಹುಡುಗಿ.. ಜೆ ಪಿ ನಗರದಲ್ಲಿ ತನ್ನ ಕೆಲವು ಗೆಳತಿಯರೊಡನೆ ವಾಸವಾಗಿದ್ದಳು. ಮನೆಗೆ ಬನ್ನಿ ಶ್ರೀ ಅಣ್ಣ ಅಂತ ಯಾವಾಗಲು ಕರೆಯುತ್ತಲೇ ಇದ್ದಳು. ನನ್ನ ತರಲೆ ಮಾತುಗಳು(?), ಹಾಸ್ಯ ಲಾಸ್ಯ (?) ಅಂದಿಗೂ ಹಿಟ್ ಎಂದಿದೆಂದಿಗೂ ಹಿಟ್ (?) ಅವಳ ಮನೆಯಲ್ಲಿ ಎಲ್ಲವೂ ರಿಪೀಟ್ ಆಗುತ್ತಿದ್ದವು. ಹಾಗಾಗಿ ಅಲ್ಲಿನ ಎಲ್ಲರೂ ಈ ಜಾಂಬುವಂತನನ್ನು ನೋಡಲು ಕಾಯುತ್ತಿದ್ದರು (:-) ). 

ಆಗ ಸರಸ್ವತಿ ಕೃಪೆ ಅಷ್ಟೋ ಇಷ್ಟೋ ಇದ್ದರೂ.. ತಾಯಿ ಲಕ್ಷ್ಮಿ ದೇವಿಯಾವಾಗಲೂ ಸ್ವಲ್ಪ ಅಂತರದಲ್ಲಿಯೇ ಇರುತ್ತಿದ್ದಳು. ಇವಾಗಲು ಹಾಗೆಯೇ ಅದು ಬೇರೆ ಕಥೆ. 

ಸರಿ ಒಂದು ಭಾನುವಾರ ಇದ್ದ ೫೦ ರೂಪಾಯಿಗಳನ್ನು (೫ ರೂನ ಐದು ನಾಣ್ಯಗಳು, ಹತ್ತು ರೂ ನ ಎರಡು ನೋಟುಗಳು, ಒಂದು ರೂಪಾಯಿಯ ಹತ್ತು ನಾಣ್ಯಗಳು) ತೆಗೆದುಕೊಂಡು ಹೊರಟೆ. ವಿಜಯನಗರದಿಂದ ಜೆ ಪಿ ನಗರಕ್ಕೆ. 

ಎರಡು ಬಸ್ ಬದಲಾಯಿಸಿಕೊಂಡು ಅಲ್ಲಿಗೆ ಸೇರಿದ ಮೇಲೆ ಉಳಿದದದ್ದು ಸುಮಾರು ೩೫ ರೂಪಾಯಿಗಳು (ಐದು ರೂಪಾಯಿಯ ಐದು ನಾಣ್ಯಗಳು ಮತ್ತು ಹತ್ತು ರುಪಾಯಿಯ ಒಂದು ನೋಟು). ವಾಪಸ್ ಹೋಗೋಕೆ ಹೆಚ್ಚು ಕಮ್ಮಿ ೧೫ ರೂಪಾಯಿಗಳು ಬೇಕಿದ್ದವು. ಅಂದರೆ ಜೇಬಿನಲ್ಲಿ ಉಳಿಯಬಹುದಾಗಿದ್ದು ಕೇವಲ ೨೦ ರೂಪಾಯಿಗಳು ಮಾತ್ರ. 

ಅವಳ ಮನೆಗೆ ಹೋದೆ.. ಎಲ್ಲರೂ ಪ್ರೀತಿ ವಿಶ್ವಾಸದಿಂದ ಮಾತಾಡಿಸಿದರು. ಮನಸ್ಸು ಹಕ್ಕಿಯ ಹಾಗೆ ಹಾರುತ್ತಿತ್ತು. ಆದರೆ ಅಲ್ಲಿನ ಕೆಲ ಗೆಳತಿಯರು ಯಾವುದೋ ಮದುವೆಗೆ ಹೊರಟಿದ್ದರು. ಹಾಗಾಗಿ ಹೆಚ್ಚು ಹೊತ್ತು ಇರಲಿಲ್ಲ. ಸರಿ ಎಂದು ಹೊರಟೆ. ನನ್ನ ಜೊತೆ ಈ ಜ್ಯೋತಿ ಕೂಡ ಅಣ್ಣ ನಾ ಸ್ವಲ್ಪ ದೂರ ಬರುತ್ತೇನೆ ಎಂದು ತನ್ನ ಗೆಳತಿ ತ್ರಿವೇಣಿಯನ್ನು ಕಟ್ಟಿಕೊಂಡು ಹೊರಬಿದ್ದಳು. 

ಸರಿ ಬಸ್ ಸ್ಟಾಪ್ ತನಕ ಮಾತ್ರ ಬರುತ್ತಾಳೆ ಎಂದುಕೊಂಡು ನನ್ನ ಮಾಮೂಲಿ ಮಾತುಗಳನ್ನು ಆಡುತ್ತಾ ಬಸ್ ಸ್ಟಾಪ್ ಗೆ ಬಂದು ನಿಂತೆವು. ಅಣ್ಣ ಅಪರೂಪಕ್ಕೆ ಮನೆಗೆ ಬಂದಿದ್ದೀರಾ ಹೋಟೆಲ್ ನಲ್ಲಿ ಏನಾದರೂ ತಿನ್ನೋಣ ಅಂದಳು. ಹೃದಯವನ್ನು ಮತ್ತು ಪರ್ಸು ಎರಡನ್ನು ಮುಟ್ಟಿಕೊಂಡೆ. ಎರಡು ಸದ್ದು ಮಾಡುತ್ತಿತ್ತು.. ಹೃದಯ ತನ್ನ ಬಡಿತವನ್ನು ಹೆಚ್ಚಿಸಿತ್ತು, ಪರ್ಸ್ ನಲ್ಲಿದ್ದ ನಾಣ್ಯಗಳು ನಾವಿಷ್ಟೇ ಜನ ಇರೋದು ಅಂತ ಹೇಳುತ್ತಿದ್ದವು. 

ನಾ ದೇಶಾವಾರಿ ನಗೆ ನಗುತ್ತ ಬೇಡ ಬೇಡ ಈಗ ತಾನೇ ತಿಂಡಿ ತಿಂದು ಹೊರಟಿದ್ದೇನೆ.. ಹೊಟ್ಟೆ ಹಸಿತಾ ಇಲ್ಲ ಎಂದೇ.. ಅವರು ಬಿಡಲಿಲ್ಲ.. ಇಲ್ಲ ಇಲ್ಲ ನೀವು ಏನಾದರೂ ತಿನ್ನಲೇ ಬೇಕು ಎಂದು ಬಲವಂತ ಮಾಡಿ.. ಜಯನಗರದ ಬಳಿಯ ರಾಘವೇಂದ್ರ ಮಠದ ಹತ್ತಿರ ಇದ್ದ ಶಾಂತಿ ಸಾಗರಕ್ಕೆ ಬಂದೆವು. ನಾ ಎಷ್ಟೇ ಬೇಡ ಎಂದರೂ ಅವರು ಬಿಡಲಿಲ್ಲ. 

ಸರಿ ಬರಿ ಎರಡರಲ್ಲಿ ಮೂರು ಕಾಫಿ ಕುಡಿಯೋಣ ಎಂದು ಹೇಳಿದೆ. ಅದಕ್ಕೆ ಮತ್ತೆ ಅವರಿಬ್ಬರೂ ಇಲ್ಲ ಇಲ್ಲ ಏನಾದರೂ ಸಿಹಿ ತಿನ್ನಲೇ ಬೇಕು ಎಂದರೂ. ನಾ ಎಷ್ಟೇ ಬೇಡ ಎಂದರೂ ಬಿಡದೆ ಮೂರು ಮಸಾಲೆ ದೋಸೆಗೆ ಆರ್ಡರ್ ಮಾಡಿಯೇ ಬಿಟ್ಟರು. ನಾನು ಮೆಲ್ಲಗೆ ಮೆನು ಕಾರ್ಡ್ ನೋಡಿದೆ.. ಮೂರು ಮಸಾಲೆ ಆಗಿನ ಕಾಲಕ್ಕೆ ಸುಮಾರು ಮೂವತ್ತೆರಡು ರೂಪಾಯಿಗಳಷ್ಟು ಇದ್ದವು. ಸರಿ ನನ್ನ ಹತ್ತಿರ ಇದ್ದ ಆ ದುಡ್ಡನ್ನೇ ಕೊಟ್ಟು ಅಲ್ಲಿಂದ ನಡೆದೆ ಹೋಗಿ ಮನೆ ಸೇರುವುದು ಎಂದು ಖಾತ್ರಿ ಮಾಡಿಕೊಂಡೆ. 

ಮಸಾಲೆ ದೋಸೆ ಆಯ್ತು.. ಸರಿ ಬಿಲ್ ಕೊಡಲು ನನ್ನ ಹತ್ತಿರ ಇರುವ ಹಣ ಸಾಕು ಎಂದು ತಿಳಿದ ಮೇಲೆ.. ಯಾಕೋ ಹೊಟ್ಟೆ ಸರಿ ಇಲ್ಲ ಕಾಫೀ ಬೇಡ.. ಹೋಗೋಣ ಎಂದೇ.. ಜಯನಗರದಿಂದ ವಿಜಯನಗರಕ್ಕೆ ಎಷ್ಟು ಹೊತ್ತು ನಡೆಯಬೇಕು ಎನ್ನುವ ಅಂದಾಜು ಮಾಡುತ್ತಿತ್ತು ಮನಸ್ಸು. 

ಶ್ರೀ ಅಣ್ಣ ನೀವು ಕಾಫೀ ಬೇಡ ಎನ್ನುವುದುಂಟೆ ಅದು ಕಾಫೀಗೆ ಅವಮಾನ.. ಇರಿ ಸ್ವಲ್ಪ ಸಿಹಿ ತಿನ್ನೋಣ ಎಂದಳು. ನಾ ಪ್ರತಿಭಟಿಸಿದೆ ಅವರನ್ನು ತಡೆಯಲು ಇನ್ನಿಲ್ಲದ ಪ್ರಯತ್ನ ಮಾಡಿದೆ.. 

ದುಶ್ಯಾಸನ ದ್ರೌಪದಿಯನ್ನು ಅವಳ ಅಂತಃಪುರದಿಂದ ಎಳೆದು ತರಲು ಶುರು ಮಾಡುತ್ತಾನೆ.. ಮೊದಲು ತನ್ನ ಶಕ್ತಿಯನ್ನು ಉಪಯೋಗಿಸಿ ಅವನನ್ನು ತಡೆಯುತ್ತಾಳೆ, ಆಗುವುದಿಲ್ಲ ನಂತರ ನೆಲದ ಮೇಲೆಯೇ ಬಿದ್ದು ಗಟ್ಟಿಯಾಗಿ ಅಲ್ಲಿದ್ದ ಕುರ್ಚಿ, ಕಂಬಗಳನ್ನು ಹಿಡಿದುಕೊಂಡು ತನ್ನ ಪ್ರತಿಭಟನೆ ಮಾಡುತ್ತಾಳೆ. ಆಗಲೂ ದುಶ್ಯಾಸನ ಜಗ್ಗುವುದಿಲ್ಲ. ನಂತರ ತಲೆಗೂದಲನ್ನೇ ಹಿಡಿದುಕೊಂಡು ದರ ದರ ಎಳೆದುಕೊಂಡು ಸಭೆಗೆ ಬರುತ್ತಾನೆ ದುಶ್ಯಾಸನ. 

ಅಲ್ಲಿದ್ದ ದುಷ್ಟ ಚತುಷ್ಟಯಗಳು ಅವಳ ಸೀರೆಯನ್ನು ಸೆಳೆಯಬೇಕೆಂದು ತೀರ್ಮಾನಕ್ಕೆ ಬರುತ್ತಾರೆ. ಸರಿ ಸೀರೆ ಸೆಳೆಯಲು ಶುರುಮಾಡಿದಾಗ ದ್ರೌಪದಿ ಕಷ್ಟ ಪಟ್ಟು ತನ್ನ ಮಾನವನ್ನು ಕಾಪಾಡಿಕೊಳ್ಳಲು ಪ್ರಯತ್ನ ಮಾಡುತ್ತಲೇ ಇದ್ದಳು. 

ಶ್ರೀ ಜಾಮೂನು ತಿನ್ನೋಣ ಅಂದ್ರು. ನಾ ಎಷ್ಟೇ ಬೇಡವೆಂದರೂ ಬಿಡದೆ ಮತ್ತೆ ಆರ್ಡರ್ ಮಾಡಿಯೇ ಬಿಟ್ಟರು. ಏನಪ್ಪಾ ಮಾಡುವುದು.. ಇದ್ದ ಹಣ ದೋಸೆಗೆ ಸರಿ ಆಗುತ್ತೆ.. ಜಾಮೂನು ಬಿಲ್ ಏನು ಮಾಡುವುದು.. ಮೆಲ್ಲಗೆ ಪರ್ಸ್ ಮತ್ತೊಮ್ಮೆ ಮುಟ್ಟಿ ನೋಡಿಕೊಂಡೆ. ಅದು ನಗಲೇ ಇಲ್ಲ.. ನಿನ್ನ ಹಣ ಬರಹ.. ಅಷ್ಟು ಹೇಳಿದರೂ ಕೇಳಲಿಲ್ಲ ಏನಾದರೂ ಮಾಡಿಕೊ ಅಂದು ನಕ್ಕ ಹಾಗೆ ಆಯಿತು  ನಾ ಏನು ಹೇಳಿದರೂ ಕೇಳಲಿಲ್ಲ.. ಮಹಿಳಾಮಣಿಗಳು ಯಾರ ಮಾತಾದರೂ ಕೇಳೋದು ಉಂಟೆ. 

ಮೊದಲ ಸೀರೆಯನ್ನು ಎಳೆದಾಗ ಕಷ್ಟ ಪಡುತ್ತ ಸೀರೆಯನ್ನು ಗಟ್ಟಿಯಾಗಿ ಹಿಡಿಕೊಂಡು ಜಗ್ಗಾಡಿದಳು ದ್ರೌಪದಿ. ಉಹೂಂ ದುಶ್ಯಾಸನನ ಶಕ್ತಿಯ ಮುಂದೆ ದ್ರೌಪದಿಯ ಶಕ್ತಿಯೇ.. ಅವನ ಕೈ ಮೇಲಾಯಿತು. 

ನನಗೆ ಏನೂ ತಿಳಿಯಲೇ ಇಲ್ಲ.. ಹೇಗಪ್ಪ ಇಲ್ಲಿಂದ ಹೊರಗೆ ಹೋಗುವುದು.. ಮೆಲ್ಲಗೆ ಎದ್ದು ಹೊರಗೆ ಓಡಿ ಹೋಗೋಣ ಎಂದರೆ.. ಹುಡುಗಿಯರ ಜೊತೆ ಬಂದಿದ್ದೇನೆ.. ಪೂರಾ ಬಿಲ್ ಕೊಡಲು ಹಣವಿಲ್ಲ.. ಮತ್ತೆ ನಾಳೆ ಆಫೀಸ್ ನಲ್ಲಿ ಭೇಟಿಯಾಗಲೇ ಬೇಕು.. ಅವಾಗ ದುಶ್ಯಾಸನ ಬೇಡವೇ ಬೇಡ ನನ್ನ ಮಾನ ಕಳೆಯಲು. ಏನಪ್ಪಾ ಮಾಡುವುದು.. ಯೋಚನೆ ಶುರುವಾಯಿತು.. 

ಮೂರು ಕಾಫೀ.. ಅದರಲ್ಲಿ ಅಣ್ಣನಿಗೆ ಒಂದು ಸ್ಟ್ರಾಂಗ್ ಕಾಫೀ ಆರ್ಡರ್ ಮಾಡಿಯೇ ಆಯಿತು.. "ಆಕಾಶವೇ ಬೀಳಲಿ ಮೇಲೆ" ಹಾಡು ಸಪ್ಪೆಯಾಗಿತ್ತು. ಆ ಧೈರ್ಯ ನನ್ನಲ್ಲಿ ಇರಲಿಲ್ಲ. 

ದ್ರೌಪದಿಗೆ ಅರಿವಾಯಿತು.. ನನ್ನ ಪ್ರಯತ್ನ ಮುಗಿಯಿತು.. ಇನ್ನೇನಿದ್ದರೂ ದೇವರ ಕೃಪೆ ಅಷ್ಟೇ.. ಸೀರೆಯಿಂದ ಕೈಯನ್ನು ತೆಗೆದಳು.. ಮೇಲಕ್ಕೆ ಎರಡು ಕೈಯನ್ನು ಎತ್ತಿ ಮುಗಿಯುತ್ತಾ.. "ಶ್ರೀ ಕೃಷ್ಣ.. ಇದು ನಿನ್ನ ಅವಮಾನದ ಪ್ರಶ್ನೆ.. ನನ್ನ ಪ್ರಯತ್ನ ಮುಗಿಯಿತು.. ನನ್ನ ಮಾನ ಅವಮಾನ ಎಲ್ಲವೂ ನಿನಗೆ ಸೇರಿದ್ದು.. ನಿನ್ನ ಮಾನವನ್ನು ನೀನೆ ರಕ್ಷಿಸಿಕೊ ಎಂದು ಪ್ರಾರ್ಥನೆ ಮಾಡುತ್ತಾ ಕಣ್ಣು ಮುಚ್ಚಿ "ಕೃಷ ಕೃಷ್ಣ" ಜಪಿಸುತ್ತಾ ದುಶ್ಯಾಸನ ಸೀರೆ ಎಳೆಯುತ್ತಾ ಹೋದ ಹಾಗೆ ತಿರುಗುತ್ತಾ  ನಿಂತಳು. 

ಶ್ರೀ ಶ್ರೀ ಅಣ್ಣಾ ಅಣ್ಣ ಕಾಫೀ ಬಂತು.. ಏನು ಧ್ಯಾನ ಮಾಡುತ್ತಿದ್ದೀರಾ.. ನಿಮ್ಮ ಫೇವರಿಟ್ ಕಾಫೀ ಬಂತು ಕುಡಿಯಿರಿ..ಯಾಕೋ ಕಾಫಿ ರುಚಿಸಲಿಲ್ಲ.. . ಆದರೆ ಬೇರೆ ದಾರಿಯೇ ಇಲ್ಲ... ಕಷ್ಟ ಪಟ್ಟು ಸುಮ್ಮನೆ ಮಂಗನ ಹಾಗೆ ನಗುತ್ತ ನಗುತ್ತಾ ಕಾಫೀ ಹೀರಿದೆ. ಬಿಲ್ ಬಂತು..  ಮೊದಲ ಬಾರಿಗೆ ಪಲಾಯನ ಸೂತ್ರ ಇಷ್ಟವಾಗುತ್ತಿತ್ತು... ಕೈ ತೊಳೆದು ಬರುತ್ತೀನಿ ಎಂದು ವಾಶ್ ಬೇಸಿನ್ ಕಡೆಗೆ ಅಕ್ಷರಶಃ ಆಮೆಯ ವೇಗದಲ್ಲಿ ನಡೆದೆ.. ಕೈಯನ್ನು ಸುಧೀರ್ಘವಾಗಿ ತೊಳೆದು.. ಅಂದು ತಾನೇ ಹೇರ್ ಕಟ್ ಮಾಡಿಸಿಕೊಂಡು ಚಿಕ್ಕ ಚಿಕ್ಕದಾಗಿ ಇದ್ದ ಕೂದಲನ್ನು ಬಾಚುತ್ತಲೇ ಒಂದು ಐದು ನಿಮಿಷ ಕಳೆದೆ. 

ಟೇಬಲ್ ಗೆ ಬಂದೆ.. ಅಲ್ಲಿ ಬಿಲ್ ಕಾಣಲಿಲ್ಲ.. ಹೃದಯದ ಬಡಿದ ಹೆಚ್ಚಾಯಿತು.. ಅವರಿಬ್ಬರೂ ಅಣ್ಣ ಕೈ ತೊಳೆದು ಬರುತ್ತೇವೆ ಎಂದು ವಾಶ್ ಬೇಸಿನ್ ಕಡೆ ಓಡಿದರು. .ಢವ ಢವ ಎದೆ ಬಡಿತ ಹೊರಗೆ ಕೇಳಿಸುವಷ್ಟು ಜೋರಾಗಿತ್ತು. ಮನಸ್ಸು ಎಲ್ಲದ್ದಕ್ಕೂ ಸಿದ್ದವಾಗಿತ್ತು. ಸುತ್ತಲು ನೋಡಿದೆ 

ಅವರಿಬ್ಬರೂ ಬಂದರು.. ಅಣ್ಣಾ ಏನೂ ಇನ್ನು ಇಲ್ಲೇ ಕೂತಿದ್ದೀರ.. ಇನ್ನೊಮ್ಮೆ ತಿನ್ನಬೇಕೆ.. 
ಬನ್ನಿ ಹೋಗೋಣ ಎಂದರೂ. ಮನದೊಳಗೆ ಕುಶಿಯಾದರೂ.. ಗಂಡಿನ ಅಹಂ ಕೇಳಬೇಕೆ.. ಅರೆ ಬಿಲ್ ಇನ್ನು ಬಂದಿಲ್ಲ ಕೊಡಬೇಕಲ್ವೆ.. ಅದಕ್ಕೆ.. ಕಾಯ್ತಾ ಇದ್ದೀನಿ. ನಾಲಿಗೆಯಲ್ಲಿನ ದ್ರವ ಖಾಲಿಯಾಗಿತ್ತು.   

ಆಶ್ಚರ್ಯ ಆಶ್ಚರ್ಯ ದುಶ್ಯಾಸನ ಮೊದಲ ಸೀರೆ ಎಳೆಯುತ್ತ ಹೋದಂತೆ.. ಮತ್ತೊಂದು ಸೀರೆ ದ್ರೌಪದಿಯನ್ನು ಸುತ್ತಿಕೊಂಡಿತು.. ಹೀಗೆ ಸೀರೆಗಳು ಸರಮಾಲೆಯೇ ಬರಲು ಶುರು ಮಾಡಿತು.. ಒಂದು ಸೀರೆ ಮುಗಿದನಂತರ ಇನ್ನೊಂದು ಹೀಗೆ. 

ಅಣ್ಣಾ ನೀವು ನಮ್ಮ ಮನೆಗೆ ಬಂದು.. ನಿಮ್ಮ ಹತ್ತಿರ ಬಿಲ್ ಕೊಡಿಸುವುದೇ.. ಆಗಲೇ ಕೊಟ್ಟಾಯಿತು.. ಬನ್ನಿ ಬನ್ನಿ ಎಂದರೂ. 
ಪೇಲವ ನಗೆ ನಗುತ್ತ.. ಪರ್ಸ್  ನ ಒಮ್ಮೆ ಮುಟ್ಟಿ ನೋಡಿದೆ.. ಥೂ ನಾಚಿಕೆ ಇಲ್ಲದವನೇ ಎಂದು ಬಯ್ದ ಹಾಗೆ ಆಯಿತು. 

ಇಂದಿಗೂ ಹೋಟೆಲ್ ಗೆ ಹೋದರೆ.. ಈ ದೃಶ್ಯ ಕಣ್ಣಿಗೆ ಕಾಣುತ್ತದೆ... 

ಈ ಘಟನೆಯಿಂದ ತಿಳಿದದ್ದು ಅರಿತದ್ದು ಕಲಿತದ್ದು : ಪರಿಸ್ಥಿತಿ ನಮ್ಮ ಹತೋಟಿಯಲ್ಲಿ ಇರುವ ತನಕ ನಮ್ಮ ಪ್ರಯತ್ನ ಪಡಬೇಕು.. ಕೈ ಮೀರುತ್ತಿರುವಾಗಲೂ ನಮ್ಮ ಪ್ರಯತ್ನ ಬಿಡಬಾರದು.. ಇನ್ನು ನಮ್ಮ ಕೈಯಲ್ಲಿ ಏನು ಸಾಧ್ಯವಿಲ್ಲ ಎಲ್ಲ ಅವನ ಇಚ್ಚೆ ಎಂದರಿತಾಗ ಆ ಕಾಣದ ಕೈಗೆ  ಶರಣಾಗಬೇಕು.. ಸಮಸ್ಯೆ ನಿರಾಳವಾಗಿ ಬಿಡುತ್ತದೆ.. !!!

ಹೀಗೆ ಸರಿ ಸುಮಾರು ನನ್ನ ಜನುಮ ದಿನದ ಸುತ್ತಾ ಮುತ್ತ ನಡೆದ ಈ ಪ್ರಸಂಗ ಈ ವರ್ಷದ ಜನುಮದಿನದಂದು ತುಂಬಾ ನೆನಪಿಗೆ ಬಂತು. ಕಣ್ಣು ಬಿಟ್ಟು ನೋಡಿದರೆ ಫೇಸ್ ಬುಕ್ ಗೋಡೆಯೆಲ್ಲಾ ತುಂಬಿ.. ಲ್ಯಾಪ್ಟಾಪ್ ಸ್ಕ್ರೀನ್ ಇಂದ ಹೊರಗೆ ದುಮುಕುತಿತ್ತು. ಒಂದೇ ಎರಡೇ ಸುಂದರಾತಿಸುಂದರ ಲೇಖನಗಳು, ಶುಭಾಶಯಗಳು, ಚಿತ್ರಗಳು, ಸಂದೇಶಗಳು, ಇಷ್ಟಗಳು ಅಬ್ಬಾ ಜೀವನಕ್ಕೆ ಇನ್ನೇನು ಬೇಕು. ನಮ್ಮ ಮನದಲ್ಲಿ ಎಲ್ಲರು ಇದ್ದಾರೆ ಅದು ನಮಗೆ ಗೊತ್ತಿರುತ್ತೆ.. ಎಲ್ಲರ ಮನದಲ್ಲೂ ನಾವಿದ್ದೇವೆ ನಮ್ಮ TRP ಏನು ಎಂದು ಅರಿವಾಗುವುದು ಈ ರೀತಿಯ ವಿಶೇಷದಿನಗಳಲ್ಲಿ, 

ಅಕ್ಕರೆಯಿಂದ ಶುಭಾಶಯಗಳ ಪೋಷಾಕು ತೊಡಿಸಿದ ಪ್ರತಿಯೊಬ್ಬರಿಗೂ ನನ್ನ ಪ್ರಯತ್ನ ಮೀರಿ ಅಭಿವಂದನೆಗಳನ್ನು ಸಲ್ಲಿಸಿದ್ದೇನೆ. ಬ್ಲಾಗ್ ಲೋಕದ ತಾರೆಗಳು ಕೊಟ್ಟ ಉಡುಗೆಗಳು ಒಂದೋ ಎರಡೋ ಅಲ್ಲಾ ನೂರಾರು. ಅಭಿಮಾನದ ಫಲಕಗಳನ್ನು ನನ್ನ ಮೇಲೆ ಏರಿಸಿಯೇ ಬಿಟ್ಟಿದ್ದಾರೆ.

ಪ್ರಪಂಚ ತಲೆಕೆಳಗಾದರೂ ಸರಿ ರಾತ್ರಿಗೆ ಶುಭಾಷಯ ಕೋರುವ ನನ್ನ ಮಗಳು ಭಾಗ್ಯ, ಅದ್ಭುತ ಬರಹಗಳ ಒಡತಿ ನಿವೇದಿತ ಕೊಟ್ಟಿರುವ ಭಾವ ಪೂರಿತ ಮಾತುಗಳು, ಅಚ್ಚರಿಯೆನ್ನುವಂತೆ ಪರಕಾಯ ಪ್ರವೇಶ ಮಾಡಿದಂತೆ ಬರೆದಿರುವ ಬಾಲು ಸರ್, ತುಂಬು ಹೃದಯ ಆಶೀರ್ವಾದ ಮಾಡಿರುವ ಹರಿಣಿ ಮೇಡಂ, ಚಿಕ್ಕ ಘಟನೆಯನ್ನು ವಿವರಿಸಿ ಅಭಿಮಾನದಿಂದ ಮೀಯಿಸಿರುವ ಪ್ರಕಾಶಣ್ಣ, ಸೂಪರ್ ವಿಷೆಸ್ ಕೋರಿದ DFR , ಹೇಳಿದ್ದು ಕೆಲವರ ಹೆಸರು ಹೇಳದೆ ಉಳಿದ ಆದ್ರೆ ಪುಟ್ಟ ಪುಟ್ಟ ಪದಗಳನ್ನು ಪ್ರಯೋಗಿಸಿ ನನ್ನ ಬದುಕಿಗೆ ದೊಡ್ಡ ದೊಡ್ಡ ಸಂದೇಶಗಳನ್ನ ಹೇಳಿದ ಎಲ್ಲಾ ಮಿತ್ರರಿಗೂ, ಪುಟ್ಟಿಯರಿಗೂ, ಮೇಡಂ ಗಳಿಗೂ, ಸರ್ ಗಳಿಗೂ, ಗುರುಗಳಿಗೂ ಹಾಗೆಯೇ ಹೇಳದೆ ಉಳಿದಿಹ ಹೆಸರು ಸಾವಿರಾರು ಬಂಧು ವರ್ಗಕ್ಕೆ, ಮಿತ್ರ ವೃಂದಕ್ಕೆ ನನ್ನ ಶಿರಸಾ ಪ್ರಣಾಮಗಳು.

ಎಲ್ಲರಿಗೂ ಚಿರಋಣಿ!!!

ಈ ಜನುಮದಿನಕ್ಕೆ ಸಿಕ್ಕ ಅತ್ಯುತ್ತಮ ಉಡುಗೊರೆ ಅನೇಕವು .. ಮನದಲ್ಲಿ ಬಚ್ಚಿಟ್ಟುಕೊಂಡಿದ್ದೇನೆ.. ಇನ್ನು ಕೆಲವು ಫೇಸ್ ಬುಕ್ ಗೋಡೆಯಲ್ಲಿ ಭದ್ರವಾಗಿ ನಿಂತು ಬಿಟ್ಟಿದ್ದಾವೆ.

ಬಾಹ್ಯ ಪ್ರಪಂಚಕ್ಕೆ ನನ್ನ ಶ್ರೀ ಪರ್ಪಂಚಕ್ಕೆ ತೋರಿಸಬೇಕಾದ್ದು ಈ ಕೆಳಗಿನವು. ಯಾಕೆಂದರೆ ಇದು ಕೇವಲ ನನಗಾಗಿ ಕಳಿಸಿದ ಉಡುಗೊರೆಗಳು.. ನೋಡಿ ನಿಮಗಾಗಿ..

ನನ್ನ ಮೆಚ್ಚಿನ ನಟ ಶ್ರೀ ಅನಂತನಾಗ್ ಅವರಿಂದ ಶುಭಾಶಯಗಳು ..
ಕೃಪೆ - ನಿವೇದಿತ ಚಿರಂತನ್ 

ಗೆಳೆಯ ಅನಿಲ್ ಬೆಡಗೆ ಅವರಿಂದ ಪದಗಳ ಗುಚ್ಹ